PRABHAVAA.COM

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

Kerala:

Font size:

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

From Jayram Udupi

ಕಾಸರಗೋಡು :

ದೇವರ ಸ್ವಂತ ನಾಡು ಕೇರಳದಲ್ಲಿ ಧಾರ್ಮಿಕ ಮೌಲ್ಯಗಳ ಆಚಾರ ವಿಚಾರಗಳಿಗೆ ಅದರದ್ದೇ ಆದ ಮಹತ್ವವಿದೆ. ತಲತಲಾಂತರದಿಂದ ಬಳುವಳಿಯಾಗಿ ಬಂದ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಹೋಗುತ್ತಾ ಇದ್ದಾರೆ. ಕೇರಳ ಎಂದಾಕ್ಷಣ ನೆನಪಿಗೆ ಬರುವುದು ಹಸಿರ ಐಸಿರಿಯ ನಡುವೆ ದೇವಾಲಯದ ಭವ್ಯತೆ - ಅದರ ಘನತೆಯನ್ನು ಸಾರುವ ಕೆಲವು ಅಪರೂಪದ ಆಚರಣೆ .

ಕೇರಳಂ ರಾಜ್ಯದ ಮತ್ಯಾವುದೇ ಕ್ಷೇತ್ರದಲ್ಲಿ ಕಾಣ ಸಿಗದ ಪಂಚದೇವರ ಉತ್ಸವ ಮೂರ್ತಿಗಳ ಭೂತ ಬಲಿಯು ಈ ಸನ್ನಿಧಿಯಲ್ಲಿ ಮಾತ್ರವೇ ನೋಡಬಹುದಾಗಿದೆ . ತಾಳ ಮೇಳಗಳ ಚೆಂಡೆ ನಾದಗಳ ಝೇಂಕಾರ , ಪಂಚ ಮೂರ್ತಿಗಳ ಅಲಂಕಾರ , ವೈದಿಕ ಆಚಾರ ಅನುಷ್ಠಾನದ ನೋಟವೇ ಸುಮಧುರ.

ಈ ಎಲ್ಲಾ ಅದ್ಬುತಗಳೊಂದಿಗೆ ವಿರಾಜಮಾನವಾಗಿ ಮೆರೆಯುವ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಊರ ಪರವೂರ ಭಕ್ತರ ದಿಂಡೇ ಹರಿದು ಬರುತ್ತದೆ . ಅಷ್ಟಕ್ಕೂ ಈ ಅಪರೂಪದ ದೇವಾಲಯದ ಇರುವುದು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದ ಬಯಲು ಸೀಮೆಯ ಬಾರಿಕ್ಕಾಡು ಅಥವಾ ವಾರಿಕಾಟಪ್ಪನ್ ಮಹಿಷಮರ್ಧಿನಿ ಕ್ಷೇತ್ರದಲ್ಲಿ .

ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಬಾರಿಕ್ಕಾಡುತ್ತಾಯರ ದಿವ್ಯ ಉಪಸ್ಥಿತಿಯಲ್ಲಿ ಕ್ಷೇತ್ರ ಕಾರ್ಯಗಳು ನಡೆಯುತ್ತದೆ . ಶ್ರೀ ಮಹಾ ಗಣಪತಿ , ಶ್ರೀ ಧರ್ಮಶಾಸ್ತ್ರ , ಶ್ರೀ ಮಹಾ ವಿಷ್ಣು , ಶ್ರೀ ಮಹಿಷಾಮರ್ಧಿನಿ , ಶ್ರೀ ಮಹಾದೇವ ಎಂಬೀ ಪಂಚ ದೇವರುಗಳ ಆರಾಧನೆ ನಡೆಯುವುದರಿಂದ ಪಂಚ ದೇವರ ಪಾವನ ಭೂಮಿಯೆಂದು ಕರೆಯಲ್ಪಡುತ್ತದೆ . ಶ್ರೀ ಸನ್ನಿಧಿಯಲ್ಲಿ ಮೇಷ ಮಾಸದ ವಾರ್ಷಿಕ ಜಾತ್ರೆಯಂದು ೫ ಉತ್ಸವ ಮೂರ್ತಿಗಳ ಬಲಿ ನರ್ತನ ಸೇವೆಯು ನಡೆಯುತ್ತದೆ . ಇದು ಕೇರಳ ರಾಜ್ಯದ ಮತ್ಯಾವುದೇ ಸನ್ನಿದಿಯಲ್ಲಿ ಇಂತಹ ಅಪರೂಪದ ವಿದ್ಯಮಾನ ನಡೆಯುವುದಿಲ್ಲ . ಶ್ರೀ ಕ್ಷೇತ್ರದಲ್ಲಿ ಮಹಿಷಮರ್ದಿನಿ ಗುಡಿಯು ಪ್ರತೇಕವಾಗಿದ್ದು ಪಡುವಣ ದಿಕ್ಕಿಗೆ ಮುಖಮಾಡಿದೆ . ಉಳಿದ ೪ ಉಪದೇವರುಗಳಿಗೆ ಪ್ರತೇಕವಾದ ಗುಡಿಯಿದ್ದು ಅದು ಮೂಡಣ ದಿಕ್ಕಿಗೆ ಮುಖಮಾಡಿದೆ .

ವಾರ್ಷಿಕ ಜಾತ್ರಾ ಮಹೋತ್ಸವ ಮೇ 8 ಮತ್ತು 9 ರಂದು ನಡೆಯಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ , ಧಾರ್ಮಿಕ ಕಾರ್ಯಕ್ರಮಗಳು ನಡೆದವು .

ಜಾತ್ರೆಯ ಎರಡನೇ ದಿನ ಬಾರಿಕ್ಕಾಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಶ್ರೀಭೂತ ಬಲಿ, ಉತ್ಸವ ಮೂರ್ತಿ ಮೆರವಣಿಗೆ, , ವಸಂತ ಮಂಟಪದಲ್ಲಿ ಕಟ್ಟೆಪೂಜೆ , ಪಂಚ ಮೂರ್ತಿಗಳ ನೃತ್ಯೋತ್ಸವ ಬಲಿ ನಡೆಯಿತು . ಪಂಚ ಮೂರ್ತಿಗಳ ಅಪರೂಪದ ದಿವ್ಯ ದರ್ಶನವನ್ನು ಪಡೆದು ಆನಂದ ಅನುಭವಿಸಿದ, ಭಕ್ತಿಯಿಂದ ನಮಿಸಿದ ಭಕ್ತ ಜನರ ಸಂಖ್ಯೆ ಸಾವಿರಾರು.

Comments

Leave a Comment

Prev Post *ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ
Next Post ಮೀಸಲಾತಿಯನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಉಗ್ರ ಹೋರಾಟ!

‎ನಾಡಿನ ಜನರ ಹೃದಯದಲ್ಲಿ ಯಡಿಯೂರಪ್ಪರಿಗೆ ಶಾಶ್ವತ ಸ್ಥಾನ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಲೆಕೊಡಿಗೇಹಳ್ಳಿ ಶ್ರೀನಂದಿಬಸವೇಶ್ವರ ನೂತನ ದೇವಾಲಯದ ಮಂಡಲ ಪೂಜೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ-ನಟ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ, ಭಾರೀ ಭದ್ರತೆ

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ-ನಟ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ, ಭಾರೀ ಭದ್ರತೆ

Read all News