“ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ” ಸ್ಥಾಪಿಸಲು ಸಚಿವ ಸಂಪುಟದ ನಿರ್ಧಾರ

BANGALURU:

Font size:

ಬೆಂಗಳೂರು: ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ಪ್ರಯೋಗಾಲಯಗಳು, ಈ ನಾಲ್ಕು ಘಟಕಗಳನ್ನು ಒಂದೇ ಸೂರಿನಡಿ ತಂದು ಅವುಗಳಿಂದ ಬರುವ ಆದಾಯ ಹಾಗೂ ಸರ್ಕಾರದಿಂದ ನೀಡುವ ಅನುದಾನವನ್ನು ಜೊತೆಗೂಡಿಸಿ ಸದರಿ ಘಟಕಗಳನ್ನು ಅಭಿವೃದ್ಧಿಪಡಿಸಲು “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ” ಯನ್ನು ಸ್ಥಾಪಿಸಲು ಹಾಗೂ ಸದರಿ ಏಜೆನ್ಸಿಯ ಪ್ರಕಾರ್ಯದಂತೆ ಕಾರ್ಯನಿರ್ವಹಿಸಲು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರು: ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ಪ್ರಯೋಗಾಲಯಗಳು, ಈ ನಾಲ್ಕು ಘಟಕಗಳನ್ನು ಒಂದೇ ಸೂರಿನಡಿ ತಂದು ಅವುಗಳಿಂದ ಬರುವ ಆದಾಯ ಹಾಗೂ ಸರ್ಕಾರದಿಂದ ನೀಡುವ ಅನುದಾನವನ್ನು ಜೊತೆಗೂಡಿಸಿ ಸದರಿ ಘಟಕಗಳನ್ನು ಅಭಿವೃದ್ಧಿಪಡಿಸಲು “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ” ಯನ್ನು ಸ್ಥಾಪಿಸಲು ಹಾಗೂ ಸದರಿ ಏಜೆನ್ಸಿಯ ಪ್ರಕಾರ್ಯದಂತೆ ಕಾರ್ಯನಿರ್ವಹಿಸಲು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಏಜೆನ್ಸಿಯ ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ಪ್ರಸ್ತಾಪಿತ ನಾಲ್ಕು ಘಕಟಗಳಿಗೆ ಅವಶ್ಯವಿರುವ ಉಪಕರಣ, ಪರಿಕರಗಳ ಖರೀದಿ, ದುರಸ್ತಿ, ನಿರ್ವಹಣೆ ಮತ್ತು ಆಸ್ತಿ ಸಂರಕ್ಷಿಸಲು ಅವಶ್ಯಕವಿರುವ ಸುರಕ್ಷಿತ ಕ್ರಮಗಳನ್ನು ಆಕರಣೆಯಾಗುವ ಸೇವಾ ಶುಲ್ಕದಿಂದ ಕೆ.ಟಿ.ಪಿ.ಪಿ ನಿಯಮಾವಳಿಯನ್ವಯ ಹಾಗೂ ಚಾಲ್ತಿಯಲ್ಲಿರುವ ಆರ್ಥಿಕ ಇಲಾಖೆಯ ನಿಯಮ/ಸುತ್ತೋಲೆ ಗಳಿಗೊಳಪಟ್ಟು ಕೈಗೊಳ್ಳಲು ನಿರ್ಧರಿಸಿದೆ (ಹೊಸ ಕಟ್ಟಡಗಳ ನಿರ್ಮಾಣ ಹೊರತುಪಡಿಸಿ)
ಪ್ರಸ್ತಾಪಿತ ನಾಲ್ಕು ಘಟಕಗಳು ಮತ್ತು “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ” ಘಟಕದ ಕಾರ್ಯನಿರ್ವಹಣೆಗೆ ಅವಶ್ಯವಿರುವ ಮಾನವ ಸಂಪನ್ಮೂಲವನ್ನು ಹೊರಗುತ್ತಿಗೆ ಆಧಾರದ ಮೇರೆಗೆ ಪಡೆಯಲ ಹಾಗೂ ನಿರ್ವಹಣಾ ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ.

ಬೀಜೋತ್ಪಾದನಾ ಕೇಂದ್ರಗಳ ಜಮೀನನ್ನು ಅನಿವಾರ್ಯ ಸಂದರ್ಭಗಳಲ್ಲಿ ಇತರೆ ಇಲಾಖೆ / ಸಂಸ್ಥೆಗೆ ನೀಡಬೇಕಾದಲ್ಲಿ ಸದರಿ ಜಮೀನಿನ ಬದಲು ಸಾಗುವಳಿ ಯೋಗ್ಯ ಸಮಾನ ಮೌಲ್ಯದ, ಆದ್ಯತೆ ಮೇರೆಗೆ ಅದೇ ತಾಲ್ಲೂಕಿನಲ್ಲಿ ಜಮೀನು ಮಂಜೂರು ಮಾಡುವ ಷರತ್ತಿಗೊಳಪಟ್ಟು “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ”ಯ ಸಹಮತಿಯನ್ನು ಪಡೆಯಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರಿಗೆ ವಿವರಿಸಿದರು.
⦁ ೨೩ ಜಿಲ್ಲೆಗಳಲ್ಲಿ ೪೫ ಬೀಜೋತ್ಪಾದನ ಕೇಂದ್ರಗಳು.
⦁ ಒಟ್ಟು ೮೯೩ ಹೆಕ್ಟೇರ್ ವಿಸ್ತೀರ್ಣದ ಭೂಮಿಯಲ್ಲಿ ಬಿತ್ತನೆ ಬೀಜಗಳನ್ನು ಉತ್ಪಾದಿಸುತ್ತಿವೆ.
⦁ ೭೪೨ ರೈತ ಸಂಪರ್ಕ ಕೇಂದ್ರಗಳು ಹೋಬಳಿಗೊಂದರAತೆ ಕಾರ್ಯನಿರ್ವಹಿಸುತ್ತಿವೆ.
⦁ ರಾಜ್ಯದಲ್ಲಿ ಮೊದಲ ಪರತಂತ್ರ ಜೀವಿ ಪ್ರಯೋಗಾಲಯವನ್ನು ಮಂಡ್ಯದಲ್ಲಿ ಪ್ರಾರಂಭಿಸಲಾಗಿದೆ.
⦁ ೬ ಜೈವಿಕ ನಿಯಂತ್ರಣ / ಪರತಂತ್ರ ಜೀವಿ ಪ್ರಯೋಗಾಲಯಗಳು ಮಂಡ್ಯ, ಕಲಬುರಗಿ, ಗಂಗಾವತಿ, ದಾವಣಗೆರೆ, ಧಾರವಾಡ ಮತ್ತು ಬೈಲಹೊಂಗಲಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೈವಿಕ ನಿಯಂತ್ರಣಕಾರಕ ಟ್ರೆöÊಕೋಗ್ರಾಮ್ ಹಾಗೂ ಜೈವಿಕ ಪೀಡೆನಾಶಕಗಳಾದ ಟ್ರೆöÊಕೋಡರ್ಮಾ, ಸುಡೊಮೊನಾಸ್ ಮತ್ತು ಮೆಟರೈಸಿಯಂ ಉತ್ಪಾದಿಸಿ ವಿತರಣೆ ಮಾಡಲಾಗುತ್ತಿದೆ.
⦁ ೨೩ ಕೃಷಿ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
⦁ ರೈತ ಸಂಪರ್ಕ ಕೇಂದ್ರಗಳ ಸೇವಾಶುಲ್ಕ, ಬೀಜೋತ್ಪಾದನೆ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಇತರ ಪ್ರಯೋಗಾಲಯಗಳಿಂದ ಬರುವ ಆದಾಯವನ್ನು ಒಗ್ಗೂಡಿಸಿ ಸರ್ಕಾರವು ನೀಡುವ ಅನುದಾನದ ಜೊತೆಗೆ ಸಮಗ್ರ ಅಭಿವೃದ್ಧಿಗೆ ಉಪಯೋಗಿಸಲು ಪ್ರಸ್ತಾಪಿಸಲಾಗಿದೆ.

ಮಾದರಿ ನೀತಿ ಸಂಹಿತೆ: ಶಿಗ್ಗಾಂವಿ, ಸಂಡೂರು (ಎಸ್‌ಟಿ) ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ, ೨೦೨೪ – ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ.

ಸರ್ಕಾರಿ ಅಭಿಯೋಜಕರ ನೇಮಕಾತಿ: ಲೋಕಾಯುಕ್ತ ಸಂಸ್ಥೆಯಲ್ಲಿ ೨೦ ಅಪರ ನಿಬಂಧಕರು (ವಿಚಾರಣೆಗಳು) ಮಂಜೂರಾಗಿವೆ. ಪ್ರತಿಯೊಬ್ಬ ಅಪರ ನಿಬಂಧಕರಿಗೆ ಒಬ್ಬ ಹಿರಿಯ ಸರ್ಕಾರಿ ಅಭಿಯೋಜಕರು ಮಂಡನಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು. ಈಗಾಗಲೇ ೦೮ ಜನ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ೧೨ ಜನ ನಿವೃತ್ತ ಅಧಿಕಾರಿಗಳನ್ನು ಖಾಲಿ ಹುದ್ದೆಗಳಿಗೆ ಎದುರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ನಿರ್ಧರಿಸಲಾಗಿದೆ.
೧. ಬಿ.ರಂಗಸ್ವಾಮಿ (ನಿವೃತ್ತ ಸರ್ಕಾರಿ ಅಭಿಯೋಜಕರು)
೨. ಗಣಪತಿ, ನಿವೃತ್ತ ಸರ್ಕಾರಿ ಅಭಿಯೋಜಕರು
೩. ಕೆ.ಎಸ್.ರೇವಣಸಿದ್ದಪ್ಪ ನಿವೃತ್ತ ಸರ್ಕಾರಿ ಅಭಿಯೋಜಕರು
೪. ಬಿ.ರಾಜೇಶ್ವರಿ, ನಿವೃತ್ತ ಕಾನೂನು ಅಧಿಕಾರಿ (ಹಿರಿಯ)
೫. ಬಿ.ಅಣ್ಣೇಗೌಡ, ನಿವೃತ್ತ ೧ನೇ ಅಪರ ಸರ್ಕಾರಿ ಅಭಿಯೋಜಕರು
೬. ಎಂ.ಎಸ್.ಮAಜುಳ, ನಿವೃತ್ತ ಕಾನೂನು ಅಧಿಕಾರಿ (ಹಿರಿಯ)
೭. ಎಸ್.ಬಿ.ಹಾವೇರಿ, ನಿವೃತ್ತ ಸರ್ಕಾರಿ ಅಭಿಯೋಜಕರು
೮. ಡಿ.ಸುಜಾತ, ನಿವೃತ್ತ ಕಾನೂನು ಅಧಿಕಾರಿ (ಹಿರಿಯ)
೯. ಎಸ್.ರಾಜಣ್ಣ, ನಿವೃತ್ತ ಸರ್ಕಾರಿ ಅಭಿಯೋಜಕರು
೧೦. ಬಿ.ವೈ.ಕೆಂಭಾವಿ, ನಿವೃತ್ತ ೩ನೇ ಅಪರ ಸರ್ಕಾರಿ ಅಭಿಯೋಜಕರು
೧೧. ಕೆ.ಜಿ.ಕಲ್ಪನ, ನಿವೃತ್ತ ಕಾನೂನು ಅಧಿಕಾರಿ (ಹಿರಿಯ)
೧೨. ಜಿ.ಬಸವರಾಜ, ನಿವೃತ್ತ ಸರ್ಕಾರಿ ಅಭಿಯೋಜಕರು
ಇವರೆಲ್ಲರೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ.

ಇಲಾಖಾ ವಿಚಾರಣೆ ಕೈಬಿಡಲು ತೀರ್ಮಾನ: ಶ್ರೀ ಬಿ.ವಿ ಮಾರುತಿ ಪ್ರಸನ್ನ, ಸರ್ಕಾರದ ಉಪ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಸಚಿವಾಲಯ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ, ೧೯೮೪ರ ಸೆಕ್ಷನ್ ೧೨(೩) ರಡಿ ಇಲಾಖಾ ವಿಚಾರಣೆ ವಹಿಸಲು ಮಾಡಿರುವ ಶಿಫಾರಸ್ಸನ್ನು ಕೈಬಿಡಲು ನಿರ್ಧರಿಸಿದೆ.
⦁ ಶ್ರೀ ಬಿ.ವಿ ಮಾರುತಿ ಪ್ರಸನ್ನ ಇವರು ದೂರು ಸಲ್ಲಿಕೆಯಾದ ದಿನದಂದು ತಹಶೀಲ್ದಾರ್, ತುಮಕೂರು ಆಗಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ.
⦁ ಈ ಹಿನ್ನೆಲೆಯಲ್ಲಿ ಇವರ ವಿರುದ್ಧದ ಶಿಸ್ತು ಕ್ರಮವನ್ನು ಕೈಬಿಡಲು ಪ್ರಸ್ತಾಪಿಸಲಾಗಿದೆ.

ಜಿ.ಎಸ್.ಟಿ ಕಾಯ್ದೆಗೆ ತಿದ್ದುಪಡಿ: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, ೨೦೨೪”ಕ್ಕೆ ಅನುಮೋದನೆ ನೀಡಿದೆ.
⦁ ಮೇಲ್ಮನವಿ ಸಲ್ಲಿಸಲು ಪೂರ್ವ ಠೇವಣಿಯ ಶೇಕಡಾವಾರು ಮೊತ್ತವನ್ನು ವಿವಾಧಿತ ತೆರಿಗೆಯ ಶೇ.೧೦ ಕ್ಕೆ ಸೇರಿಸಲು ಮಿತಿಗೊಳಿಸಲು ಮತ್ತು ಗರಿಷ್ಠ ಮೊತ್ತವನ್ನು ಸಿ.ಜಿ.ಎಸ್.ಟಿ ಮತ್ತು ಎಸ್.ಜಿ.ಎಸ್.ಟಿ ರೂ.೨೦.೦೦ ಕೋಟಿಗೆ ಮತ್ತು ಐ.ಜಿ.ಎಸ್.ಟಿಗೆ ರೂ.೪೦.೦೦ ಕೋಟಿಗೆ ಕಡಿಮೆಗೊಳಿಸಲು ಈ ತಿದ್ದುಪಡಿಯ ಮೂಲಕ ಪ್ರಸ್ತಾಪಿಸಲಾಗಿದೆ.
⦁ ಜಿ.ಎಸ್.ಟಿ ಕಾಯ್ದೆ ಸೆಕ್ಷನ್ ೧೦೭ ಅಥವಾ ೧೦೮ ರಡಿಯಲ್ಲಿ ಹೊರಡಿಸಲಾದ ಆದೇಶಗಳ ವಿರುದ್ಧ ಮೇಲ್ಮನವಿಯ ಸಲ್ಲಿಸುವ ಹಕ್ಕನ್ನು ಇದು ತೆರಿಗೆದಾರರಿಗೆ ನೀಡುತ್ತದೆ. \
⦁ ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸುವಾದ ಪಾವತಿಸಿರುವ ಮೊತ್ತಕ್ಕೆ ಹೆಚ್ಚುವರಿಯಾಗಿ ತೆರಿಗೆದಾರರು ವಿವಾದದಲ್ಲಿರುವ ಮೊತ್ತವನ್ನು ಮುಂಚಿತವಾಗಿ ಠೇವಣಿ ಮಾಡಬೇಕಾಗುತ್ತದೆ.

ಎನ್.ಎಚ್.ಎಮ್ ಸಿಬ್ಬಂದಿ ಮುಂದುವರಿಕೆ: ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ಮಂಜೂರಾದ ಒಟ್ಟು ೭೦೪೫ ಸಮುದಾಯ ಆರೋಗ್ಯ ಅಧಿಕಾರಿ ಉದ್ದೆಗಳ ಕಾಲಾವಧಿಯನ್ನು ಗುತ್ತಿಗೆ ಆಧಾರದಲ್ಲಿ ೨೦೨೫ನೇ ಮಾರ್ಚ್ ಅಂತ್ಯದವರೆಗೆ ಕೇಂದ್ರ ಸರ್ಕಾರದಿಂದ ೨೦೨೪-೨೫ನೇ ಸಾಲಿಗೆ ಖಔP ರಲ್ಲಿ ಅನುಮೋದನೆಯಾಗಿರುವ ಒಟ್ಟು ರೂ.೨೭೮.೬೪ ಕೋಟಿಗಳ ಅನುದಾನದಲ್ಲಿ ಭರಿಸಿ ಮುಂದುವರೆಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಮಾಧ್ಯಮದವರಿಗೆ ತಿಳಿಸಿದರು.
⦁ ಒಟ್ಟು ಯೋಜನಾ ವೆಚ್ಚ ರೂ.೨೭೮.೬೪ ಕೋಟಿ.
⦁ ಒಟ್ಟು ಹುದ್ದೆಗಳು ೭೦೪೫
⦁ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಖ್ಯೆ: ೬೬೫೬
⦁ ೨೦೨೪-೨೫ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ಸೇವೆ ಕೊನೆಗೊಂಡಿರುವ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಮುಂದುವರೆಸಲು ಕೇಂದ್ರ-ರಾಜ್ಯಗಳ ೪೦:೬೦ ಅನುಪಾತದಲ್ಲಿ ಅನುದಾನ ಒದಗಿಸಲಾಗುವುದು ಎಂದು ಸಚಿವರು ವಿವರಿಸಿದರು.
ಪೊಲೀಸ್ ಭವನ ನಿರ್ಮಾಣ: ಬೆಂಗಳೂರಿನ ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆಯಲ್ಲಿನ ಏSಖP ೧ನೇ ಪಡೆಯ ಆವರಣದಲ್ಲಿ ಪೊಲೀಸ್ ಇಲಾಖೆಯ ಸೆಂಟ್ರಲ್ ಕಮಾಂಡ್ ಸೆಂಟರ್‌ನ್ನು ಒಳಗೊಂಡAತೆ ಸುಸಂಘಟಿತ ಪೊಲೀಸ್ ಭವನ ನಿರ್ಮಾಣ ಕಾಮಗಾರಿಯ ರೂ.೧೦೨.೮೦ ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
೧. ೨೦೧೬-೧೭ನೇ ಸಾಲಿನ ದರಪಟ್ಟಿಯ ದರಗಳೊಂದಿಗೆ ಮೂಲ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು ಎರಡು ಹಂತಗಳಲ್ಲಿ ರೂ.೧೨,೪೦೦ ಲಕ್ಷಗಳಿಗೆ ಪರಿಷ್ಕೃತಗೊಂಡಿರುತ್ತದೆ.
೨. ಮೂಲ ಅಂದಾಜಿನಲ್ಲಿ ಶೇ.೫% ಅನುವು ಮಾಡಿಕೊಳ್ಳಲಾದ ಟಿಪಿಗೆ ಬದಲಾಗಿ ಗುತ್ತಿಗೆ ಮೊತ್ತ ೧೧.೯೧% ಗಳಾಗಿದ್ದು, ಹೆಚ್ಚುವರಿಯಾಗಿ ರೂ.೬೭೬.೬೯ ಲಕ್ಷಗಳಾಗಿರುತ್ತದೆ.
೩. ಮೂಲ ಅಂದಾಜಿನಲ್ಲಿ ೧೨% ಜಿಎಸ್‌ಟಿ ಅಳವಡಿಸಿಕೊಂಡಿದ್ದು, ಕೇಂದ್ರ ಸರ್ಕಾರದ ನಿರ್ಧಾರದಂತೆ ೧೮% ಜಿಎಸ್‌ಟಿ ಆದ ಕಾರಣ ರೂ.೬೩೬.೨೭ ಲಕ್ಷಗಳು ಅಧಿಕವಾಗಿರುತ್ತದೆ.
೪. ಬೇಸ್‌ಮೆಂಟ್ ಮತ್ತು ಸ್ಟೀಲ್ಟ್ ಫ್ಲೋರ್ ಅನ್ನು ೨೨೦೦೦ ಚ.ಅ ಗಳಿಂದ ೫೨೦೦೦ ಚ.ಅ.ಗಳಿಗೆ ವಿಸ್ತರಿಸಿ ಬೇಸ್‌ಮೆಂಟ್‌ನಲ್ಲಿ ೪೫ ವಾಹನಗಳಿಗೆ ೧೦೫ ವಾಹನಗಳ ನಿಲುಗಡೆಗೆ ಹಾಗೂ ಸ್ಟಿಲ್ಟ್ ಫ್ಲೋರ್ ಕಛೇರಿ ಉಪಯೋಗಕ್ಕೆ ನಕಾಶೆಗಳು ಬದಲಾಗಿರುತ್ತವೆ.
೫. ನಿವೇಶನದಲ್ಲಿ ೩೬ ಮರಗಳಿದ್ದು ತೆರವುಗೊಳಿಸಲು ಗುತ್ತಿಗೆದಾರರಿಗೆ ಪಾವತಿಸಲು ಇಐಆರ್‌ಎಲ್ ಆಗಿದೆ.
೬. ಬದಲಾದ ನಕಾಶೆ ಮತ್ತು ಸ್ವರೂಪ/ವಿನ್ಯಾಸಕ್ಕೆ ತಕ್ಕಂತೆ ಕಬ್ಬಿಣ ಮತ್ತು ಕಾಂಕ್ರೀಟ್ ಐಟಂಗಳಲ್ಲಿ ಹೆಚ್ಚುವರಿಯಾಗಿರುತ್ತದೆ.
೭. ಸ್ಟಿಲ್ಟ್ ಫ್ಲೋರ್‌ನ ಎತ್ತರವನ್ನು ಇತರೆ ಮಹಡಿಗಳ ಎತ್ತರಕ್ಕೆ ಹೊಂದುವAತೆ ೪.೫ ಮೀಟರ್‌ಗೆ ಹೊಂದುವAತೆ ಎತ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೂರ್ಯನಗರದಲ್ಲಿ ಬಹುಮಹಡಿ ವಸತಿ ಸಮುಚ್ಛಯ: ಕರ್ನಾಟಕ ಗೃಹ ಮಂಡಳಿಯ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸೂರ್ಯನಗರ ೧ನೇ ಹಂತದ ನಿವೇಶನ ಸಂಖ್ಯೆ: ೯೫೩ ಮತ್ತು ೪೫೪, ೪೫೫ರಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಎರಡು ಬಹುಮಹಡಿ ವಸತಿ ಸಮುಚ್ಛಯಗಳನ್ನು (೫೦ ಮತ್ತು ೪೦ ಫ್ಲಾಟ್‌ಗಳು) ನಿರ್ಮಿಸುವ ಒಟ್ಟು ರೂ.೧೦೧ ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆಗೆ ನೀಡಲಾಗಿದೆ ಎಂದು ಕಾನೂನು ಸಚಿವರು ತಿಳಿಸಿದರು.
⦁ ಒಟ್ಟು ಯೋಜನಾ ವೆಚ್ಚ ರೂ.೧೦೧.೦೦ ಕೋಟಿ.
⦁ ವಿಸ್ತೀರ್ಣ ೧ ಎಕರೆ ೫ ಗುಂಟೆ.
⦁ ೦.೫ ಎಕರೆಯಲ್ಲಿ ಎರಡು ಬಹುಮಹಡಿ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗುವುದು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ: ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿರುವ ಶಿವಮೊಗ್ಗ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ರೂ.೧೨೭.೪೪ ಕೋಟಿಗಳ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
⦁ ಹೆಚ್ಚುವರಿ ಮೊತ್ತ ರೂ.೧೨೭.೪೪ ಕೋಟಿ.
⦁ ಈ ಮೊದಲಿನ ವೆಚ್ಚ ರೂ.೩೮೪.೦೦ ಕೋಟಿ ಮತ್ತು ೬೫.೨೨ ಕೋಟಿ ಹೆಚ್ಚುವರಿ ಅನುದಾನ ಸೇರಿ ಇಲ್ಲಿಯವರೆಗೂ ಅನುಮೋದಿತವಾದ ವೆಚ್ಚ ರೂ.೪೪೯.೨೨ ಕೋಟಿ.
⦁ ಪ್ರಸ್ತುತ ಹಲವಾರು ಹೊಸ ಐಟಂಗಳನ್ನು ಮತ್ತು ಹೆಚ್ಚುವರಿ ಪ್ರಮಾಣಗಳನ್ನು ಸೇರಿಸಲಾಗಿದೆ.
⦁ ಇದರಿಂದ ರೂ.೪೪೯.೨೨ ಕೋಟಿ ವೆಚ್ಚಕ್ಕೆ ಅನುಮೋದನೆಯಾದ ಮೊತ್ತಕ್ಕೆ ಹೆಚ್ಚುವರಿಯಾಗಿ ರೂ.೧೨೭.೪೪ ಕೋಟಿ ಅನುದಾನದ ಅವಶ್ಯಕತೆಯನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದರು.

ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ ೧೧೦ ಕಿ.ಮೀ ರಸ್ತೆ ಅಭಿವೃದ್ಧಿ: ದೇವನಹಳ್ಳಿ-ವಿಜಯಪುರ - ಹೆಚ್.ಕ್ರಾಸ್ – ವೇಮಗಲ್ – ಮಾಲೂರು – ತಮಿಳುನಾಡು ಗಡಿವರೆಗೆ (ಮಾಲೂರು-ಹೊಸಕೋಟೆ ರಸ್ತೆ ಸೇರಿದಂತೆ) ೧೧೦.೪೦ ಕಿ.ಮೀ ಉದ್ದದ ರಸ್ತೆಯನ್ನು ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ (ಊಂಒ) ಒಟ್ಟಾರೆ ರೂ.೩೧೯೦.೦೦ ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವರು ವಿವರಿಸಿದರು.
⦁ ಒಟ್ಟು ಯೋಜನಾ ವೆಚ್ಚ ರೂ.೩೧೯೦.೦೦ ಕೋಟಿ.
⦁ ಪ್ಯಾಕೇಜ್-೦೧: ವೇಮಗಲ್-ಮಾಲೂರು ಮತ್ತು ಮಾಲೂರು ಕೈಗಾರಿಕಾ ಪ್ರದೇಶ – ತಮಿಳುನಾಡ ಗಡಿಯವರೆಗೆ – ರೂ.೯೫೮.೦೦ ಕೋಟಿ (ಕೆಶಿಪ್)
⦁ ಪ್ಯಾಕೇಜ್-೦೨: ಹೊಸಕೋಟೆ-ಮಾಲೂರು, ಮಾಲೂರಿನಲ್ಲಿ ಇಟevಚಿಣeಜ ಅoಡಿಡಿiಜoಡಿ ಸೇರಿ ಮಾಲೂರು ಕೈಗಾರಿಕಾ ಪ್ರದೇಶ ಒಳಗೊಂಡAತೆ – ರೂ.೧೦೫೪.೦೦ ಕೋಟಿ (ಕೆಶಿಪ್)
⦁ ಪ್ಯಾಕೇಜ್-೩: ದೇವನಹಳ್ಳಿ-ವೇಮಗಲ್ – ಕೋಲಾರ್ – ರೂ.೧೧೭೮.೦೦ ಕೋಟಿ (ಕೆಆರ್‌ಡಿಸಿಎಲ್

ಅರಣ್ಯವಾಸಿಗಳಿಗೆ ಪುನರ್‌ವಸತಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಾಗೋಡು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ೧೯ ಸ್ವಾಧೀನದಾರರನ್ನು ಸ್ಥಳಾಂತರಿಸಿ, ಪುನರ್ ವಸತಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾದಿಓಣಿ ಗ್ರಾಮದ ಸ.ನಂ.೨೦ ಮತ್ತು ೨೧ರಲ್ಲಿ ಒಟ್ಟು ೩೩-೨೪ ಎಕರೆ/ಗುಂಟೆ ಜಮೀನನ್ನು (ಪ್ರತಿ ಕುಟುಂಬಕ್ಕೆ ೨ ಎಕರೆ ಸಾಗುವಳಿಗಾಗಿ ಹಾಗೂ ೪ ಗುಂಟೆ ವಸತಿಗಾಗಿ) ಉಚಿತವಾಗಿ ಮಂಜೂರಾತಿಗೆ ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ತಿಳಿಸಿದರು.

⦁ ೧೮ ಕುಟುಂಬಗಳ ಪೈಕಿ ೦೨ ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪದೇ ನ್ಯಾಯಾಲಯದ ಮೊರೆ ಹೋಗಿರುವುದರಿಂದ ೦೨ ಕುಟುಂಬಗಳನ್ನು ಹೊರತುಪಡಿಸಿ ಉಳಿದ ೧೬ ಕುಟುಂಬಗಳಿಗೆ ಪುನರ್‌ವಸತಿ ಕಲ್ಪಿಸಲು ಪ್ರಸ್ತಾಪಿಸಿದೆ.
⦁ ಕೇಂದ್ರ ಅಧಿಕಾರಯುಕ್ತ ಸಮಿತಿಯ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ೪ ಮತ್ತು ೫ನೇ ತರಗತಿ ವಿದ್ಯಾರ್ಥಿಗಳಿಗೆ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ ಒಟ್ಟು ರೂ.೧೪.೨೪ ಕೋಟಿಗಳ ಅಂದಾಜು ಮೊತ್ತದ “ಓದು ಕರ್ನಾಟಕ” ಚಟುವಟಿಕೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
⦁ ಒಟ್ಟು ಯೋಜನಾ ವೆಚ್ಚ ರೂ.೧೪.೨೪ ಕೋಟಿ.
⦁ ೦೪ ಮತ್ತು ೫ನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಒಟ್ಟು ೧೦,೦೩,೮೨೧ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಸುಮಾರು ೪೨,೨೫೫ ಶಾಲೆಗಳಿಗೆ ತಲಾ ೩೦ ವಿದ್ಯಾರ್ಥಿಗಳ ಸಂಖ್ಯೆಗೆ ೫೬,೪೪೩ ಕಲಿಕಾ ಸಾಮಗ್ರಿಗಳ ಸೆಟ್‌ಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ “ನಿಪುಣ್ ಭಾರತ್” ಕಾರ್ಯಕ್ರಮದ ಅಡಿಯಲ್ಲಿ ಒದಗಿಸಲಾಗುವುದು ಎಂದು ಸಚಿವ ಎಚ್.ಕೆ ಪಾಟೀಲ ತಿಳಿಸಿದರು.

ವೃತ್ತಿ ಶಿಕ್ಷಕರಿಗೆ ಪದೋನ್ನತಿ: ಶಾಲಾ ಶಿಕ್ಷಣ ಇಲಾಖೆಯ ೩೩ ಮಂದಿ ಗ್ರೇಡ್-೧ ವೃತ್ತಿ ಶಿಕ್ಷಕರಿಗೆ, ಗ್ರೂಪ್-ಬಿ ವೃಂದದ ವಿಷಯ ಪರಿವೀಕ್ಷಕರು (ವೃತ್ತಿ ಶಿಕ್ಷಣ) ಹುದ್ದೆಗೆ ದಿನಾಂಕ: ೨೮.೦೪.೨೦೦೦ರ ಕಾರ್ಯಕಾರಿ ಆದೇಶದಲ್ಲಿ ನಿಗದಿಪಡಿಸಿರುವ ನೇಮಕಾತಿ ವಿಧಾನವನ್ನು ಅನುಸರಿಸಿ ಪದೋನ್ನತಿ ನೀಡಲು ಪ್ರಸ್ತಾಪಿಸಲಾಗಿತ್ತು. ಶಾಲಾ ಶಿಕ್ಷಣ ಇಲಾಖೆಯ ಗ್ರೇಡ್-೧ ವೃತ್ತಿ ಶಿಕ್ಷಕರಿಗೆ, ಗ್ರೂಪ್-ಬಿ ವೃಂದದ ಹುದ್ದೆಗೆ ಪದೋನ್ನತಿ ನೀಡಲು ನಿರ್ಣಯಿಸಲಾಗಿದೆ ಎಂದು ಸಚಿವರು ತಿಳಿಸಿದರು.
⦁ ೩೩ ಖಾಲಿ ಹುದ್ದೆಗಳಿದ್ದು, ಖಾಲಿ ಇರುವ ಹುದ್ದೆಗಳನ್ನು ವಿಷಯ ಪರಿವೀಕ್ಷಕರು (ವೃತ್ತಿ ಶಿಕ್ಷಣ) ಹುದ್ದೆಯ ನೇಮಕಾತಿ ವಿಧಾನವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಷರತ್ತಿನೊಂದಿಗೆ ಸರ್ಕಾರದ ಕಾರ್ಯಕಾರಿ ಆದೇಶ ಇಡಿ ೧೮೩ ಡಿಪಿಐ ೧೯೯೦, ದಿನಾಂಕ: ೨೮.೦೪.೨೦೦೦ ರಲ್ಲಿ ನಿಗಧಿಪಡಿಸಿರುವ ನೇಮಕಾತಿ ವಿಧಾನದನ್ವಯ ಬಡ್ತಿ ಮೂಲಕ ತುಂಬಲು ಪ್ರಸ್ತಾಪಿಸಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ ರವರು ಮಾಧ್ಯಮಕ್ಕೆ ವಿವರಿಸಿದರು.

ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ೩೩ ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸಲು ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ ೪೫೦ ವಿವಿಧ ಹುದ್ದೆಗಳಿಗೆ ಮಂಜೂರಾತಿಯನ್ನು ಸಚಿವ ಸಂಪುಟವು ನೀಡಿದೆ ಎಂದು ಸಚಿವರು ತಿಳಿಸಿದರು.
⦁ ಒಟ್ಟು ವೆಚ್ಚ ರೂ.೧೫.೪೫ ಕೋಟಿಗಳು.
⦁ ಹೆಚ್ಚುವರಿ ಸಿಬ್ಬಂದಿಗಳಿಗೆ ತಗುಲುವ ಆವರ್ತಕ ವೆಚ್ಚ ರೂ.೩೭.೭೯ ಕೋಟಿ.

ವೀರಪ್ಪನ್ ತಂಡದ ವೈದ್ಯಕೀಯ ಸಿಬ್ಬಂದಿಗೆ ನಿವೇಶನ: ವೀರಪ್ಪನ್ ಕಾರ್ಯಾಚರಣೆಯ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಭಾಗವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ನಿವೇಶನ ಮಂಜೂರಾತಿ ಸೌಲಭ್ಯವನ್ನು ಅದೇ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಬ್ಬರು ನಿವೃತ್ತ ವೈದ್ಯಕೀಯ ಅಧಿಕಾರಿ ಮತ್ತು ಇಬ್ಬರು ನಿವೃತ್ತ ಶುಶ್ರೂಷಕರಿಗೂ ವಿಸ್ತರಿಸಿ ಚಾಮರಾಜನಗರ –ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿರುವ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.
೧. ಡಾ. ಸಿದ್ದಪ್ಪಸ್ವಾಮಿ ಡಿ, ದಿ.ದೊಡ್ಡಸಿದ್ದಶೆಟ್ಟಿ ನಿವೃತ್ತ ಹಿರಿಯ ತಜ್ಞರು, ಚಾಮರಾಜನಗರ – ೪೦*೬೦=೨೪೦೦ ನಿವೇಶನದ ಅಳತೆ.
೨. ಶ್ರೀ ಮಹಾದೇವಯ್ಯ ಬಿ ದಿ.ಬೆಳ್ಳಯ್ಯ ನಿವೃತ್ತ ಶುಶ್ರೂಷಕರು, ಚಾಮರಾಜನಗರ – ೩೦*೪೦=೧೨೦೦ ನಿವೇಶನದ ಅಳತೆ.
೩. ಶ್ರೀ ಕುಮಾರಸ್ವಾಮಿ ಎಸ್.ಪಿ, ನಿವೃತ್ತ ಶುಶ್ರೂಷಕರು, ಚಾಮರಾಜನಗರ – ೩೦*೪೦=೧೨೦೦ ನಿವೇಶನಗಳನ್ನು ನೀಡಲು ಸಚಿವ ಸಂಪುಟ ಒಪ್ಪಿದೆ ಎಂದು ಸಚಿವರು ತಿಳಿಸಿದರು.

ಮುಧೋಳ ನಗರಕ್ಕೆ ಕೃಷ್ಣಾ ನದಿಯಿಂದ ಕುಡಿಯುವ ನೀರು: ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಗುಳಬಾಳ ಹಳ್ಳಿ ಹತ್ತಿರದ ಕೃಷ್ಣಾ ನದಿ ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಒದಗಿಸುವ ರೂ.೧೭೭.೧೦ ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
⦁ ಒಟ್ಟು ಯೋಜನಾ ವೆಚ್ಚ ರೂ.೧೭೭.೧೦ ಕೋಟಿ.
⦁ ೨೦೧೧ರ ಜನಗಣತಿ ಪ್ರಕಾರ ೫೫೧೯೯ ಜನಸಂಖ್ಯೆ.
⦁ ೨೦೨೫ಕ್ಕೆ ೬೮೦೦೦, ೨೦೪೦ಕ್ಕೆ ೮೭೦೦೦, ೨೦೫೫ಕ್ಕೆ ೧೧೦೦೦೦.
⦁ ವಿತರಣಾ ಜಾಲ ಮತ್ತು ಗೃಹ ಸಂಪರ್ಕಗಳನ್ನು ಒದಗಿಸಲು ಗುಳಬಾಳ ಹತ್ತಿರದ ಕೃಷ್ಣಾ ನದಿ ಮೂಲದಿಂದ ಮುಧೋಳ ನಗರಕ್ಕೆ ಸುಧಾರಿತ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಅಂದಾಜು ಪಟ್ಟಿ ಸಿದ್ದಪಡಿಸಲಾಗಿತ್ತು.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಷೇರು ಬಂಡವಾಳ ಪ್ರಮಾಣ ಹೆಚ್ಚಳ: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ನಲ್ಲಿ ರಾಜ್ಯ ಸರ್ಕಾರದ ಈಕ್ವಿಟಿ ಷೇರುಗಳ ಪ್ರಮಾಣವನ್ನು ೪೯% ರಿಂದ ೯೦%ಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ ರವರು ತಿಳಿಸಿದರು.

ನಿವೇಶನ ನೋಂದಣಿಗೆ ನಿರ್ಣಯ:
ಶ್ರೀ ಸುಬ್ಬರಾಯನ್ ಬಿ.ಆರ್ ನಿವೃತ್ತ ಕೆ.ಎ.ಟಿ ಸದಸ್ಯರು ಇವರಿಗೆ ಹಂಚಿಕೆಯಾಗಿರುವ ಸರ್.ಎಂ ವಿಶ್ವೇಶ್ವರಯ್ಯ ೬ನೇ ಬ್ಲಾಕ್ ಬಡಾವಣೆಯ ೧೫*೨೪ ಮೀ ಅಳತೆಯ ನಿವೇಶನ ಸಂಖ್ಯೆ: ೩೯೬೨ ಕ್ಕೆ ಬಡ್ಡಿ ಮೊತ್ತವನ್ನು ಪಾವತಿಸಿಕೊಂಡು, ವಿಶೇಷ ಪ್ರಕರಣವೆಂದು ಪರಿಗಣಿಸಿ, ವಿಳಂಬ ಮನ್ನಾ ಮಾಡಿ, ಸದರಿ ನಿವೇಶನವನ್ನು ನೋಂದಾಯಿಸಿಕೊಡಲು ನಿರ್ಣಯಿಸಲಾಗಿದೆ.
⦁ ೨೯ ದಿವಸಗಳು ವಿಳಂಬವಾಗಿ ನಿವೇಶನದ ಪೂರ್ಣ ಮೌಲ್ಯವನ್ನು ಪಾವತಿಸಿರುತ್ತಾರೆ.
⦁ ಈ ವಿಳಂಬವನ್ನು ಮನ್ನಿಸಿ ನಿವೇಶನ ಮಂಜೂರಾತಿ ಮಾಡಲು ಪ್ರಸ್ತಾಪಿಸಲಾಗಿತ್ತು.

ಅಧಿವೇಶನ: ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಬೆಳಗಾವಿಯಲ್ಲಿ ಡಿಸೆಂಬರ್ ೨ನೇ ವಾರದಲ್ಲಿ ಸಮಾವೇಶಗೊಳಿಸಲು ಪರಿಶೀಲಿಸಲಾಗುತ್ತಿದ್ದು, ದಿನಾಂಕ:, ಸ್ಥಳ ಮತ್ತು ಅಧಿವೇಶನದ ಅವಧಿಯನ್ನು ನಿರ್ಣಯಿಸಲು ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ಅಧಿಕಾರ ನೀಡಿದೆ ಎಂದು ಸಚಿವರು ತಿಳಿಸಿದರು.

ಉಗ್ರಾಣ ನಿಗಮದ ಅವಧಿ ವಿಸ್ತರಣೆ: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ WIಈ & ಓWS ೨೦೧೫-೧೬ & ಖIಆಈ-ಘಿಘಿII ಯೋಜನೆಯಡಿಯಲ್ಲಿ ಅಪೂರ್ಣಗೊಂಡಿರುವ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಯಾವುದೇ ಆರ್ಥಿಕ ಹೊರೆ (ಹೆಚ್ಚುವರಿ ಸರಕು ಸೇವಾ ತೆರಿಗೆ ಹೊರತುಪಡಿಸಿ) ಇಲ್ಲದಂತೆ ಪೂರ್ಣಗೊಳಿಸಲು ದಿನಾಂಕ: ೩೧.೦೩.೨೦೨೫ ರವರೆಗೆ ಕಾಲಾವಧಿ ವಿಸ್ತರಿಸಲು ನಿರ್ಣಯಿಸಲಾಗಿದೆ.

ಮೈಸೂರಲ್ಲಿ ಜಿ.ಟಿ.ಟಿ.ಸಿ: ಮೈಸೂರು ಜಿಲ್ಲೆಯ ವರುಣಾ ಹೋಬಳಿ ಚೋರನಹಳ್ಳಿ ಗ್ರಾಮದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ನಬಾರ್ಡ್ನ ಆರ್.ಐ.ಡಿ.ಎಫ್ ಟ್ರಾಂಚ್-೩೦ ರಡಿ ಅನುಮೋದಿಸಿರುವ ರೂ.೩೫.೦೦ ಕೋಟಿಗಳ ಮೊತ್ತದಲ್ಲಿ ಸ್ಥಾಪಿಸಲು ನಿರ್ಣಯಿಸಲಾಗಿದೆ.

ಬೆಂಗಳೂರು-ಬೀದರ್ ವಿಮಾನ ಸಂಚಾರ: ಬೀದರ್ ವಿಮಾನ ನಿಲ್ದಾಣದ ಬೆಂಗಳೂರು - ಬೀದರ್-ಬೆಂಗಳೂರು ಮಾರ್ಗವಾಗಿ ವಿಮಾನಯಾನ ಕಾರ್ಯಾಚರಣೆ ಮಾಡಲು ನಿರ್ಣಯಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಆದಿಚುಂಚನಗಿರಿ ಸಂಸ್ಥೆಗೆ ಜಮೀನು: ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು ಮತ್ತು ಟೌನ್‌ನಲ್ಲಿ ಬರುವ ವಿ.ಸಿ ಕಾಲೋನಿಯಲ್ಲಿರುವ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಅಸೆಸ್‌ಮೆಂಟ್ ಸಂಖ್ಯೆ: ೪೭೧ ರಲ್ಲಿನ ೧೨೦*೨೦೦ ಚ.ಅ ಅಳತೆಯ ಜಮೀನನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ನಾಗಮಂಗಲ, ಮಂಡ್ಯ ಜಿಲ್ಲೆ ಇವರಿಗೆ ಮಂಜೂರು ಮಾಡುವ ಬಗ್ಗೆ ಮತ್ತು ವಿ.ಸಿ ಕಾಲೋನಿಯ ಪಕ್ಕದಲ್ಲಿ ಸ.ನಂ.೧೦ ರಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿರುವ ಜಮೀನನ್ನು ಬಿಜಿಎಸ್ ಶಿಕ್ಷಣ ಸಂಸ್ಥೆಯವರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸದೇ ಆ ಸಂಸ್ಥೆಗೆ ಒದಗಿಸಲು ನಿರ್ಣಯಿಸಲಾಗಿದೆ ಎಂದು ಸಚಿವರು ವಿವರಿಸಿದರು.

ನಗರಾಭಿವೃದ್ಧಿ ಇಲಾಖೆಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಏಒಇಖಅ) ವತಿಯಿಂದ ಗಣಿಗಾರಿಕೆ ಪರಿಣಾಮ ವಲಯದಲ್ಲಿ ಸಮಗ್ರ ಪರಿಸರ ಯೋಜನೆಯಡಿ (ಅಇPಒIZ) ಮಂಜೂರು ಮಾಡಲಾದ / ಮಾಡಲಾಗುವ ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ.

ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ: ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಮಂಜೂರು ಮಾಡಿದ ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ರೂ.೩೯.೦೭ ಕೋಟಿಗಳ ಮೊತ್ತದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಣಯಿಸಿದೆ.

ರಾಯಚೂರು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ: ರಾಯಚೂರು ವಿಶ್ವವಿದ್ಯಾಲಯವನ್ನು “ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ” ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Prev Post ತಾಯಿ ಹಾಸನಾಂಭ ದರ್ಶನ‌ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ
Next Post ನಮ್ಮ‌ ಸಿಎಂ ಸಿದ್ದರಾಮಯ್ಯ ಸಾಹು ಮಹರಾಜ್-ನಾಲ್ವಡಿ ಅರಸರ ಪರಂಪರೆಯವರು: ಎಲ್.ಹನುಮಂತಯ್ಯ