ಸಹಕಾರ ಸಚಿವ ಕೆ ಎನ್ ರಾಜಣ್ಣನವರ ನೇತೃತ್ವದಲ್ಲಿ ಸ್ವಾಭಿಮಾನಿ ಸಮಾವೇಶ ಪೂರ್ವ ಸಿದ್ದತಾ ಸಭೆ

Hassan:

Font size:

ಮುಂದಿನ ತಿಂಗಳು ಡಿಸೆಂಬರ್ ೫ ರಂದು ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಸನದ ಸ್ವಾಭಿಮಾನಿ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಪೂರ್ವಸಿದ್ಧತೆಯ ಸಭೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರ ನೇತೃತ್ವದಲ್ಲಿ ನಡೆಯಿತು.

ಮುಂದಿನ ತಿಂಗಳು ಡಿಸೆಂಬರ್ ೫ ರಂದು ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಸನದ ಸ್ವಾಭಿಮಾನಿ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಪೂರ್ವಸಿದ್ಧತೆಯ ಸಭೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರ ನೇತೃತ್ವದಲ್ಲಿ ನಡೆಯಿತು.

ಈ ಸಭೆಯಲ್ಲಿ ಸಚಿವರುಗಳಾದ ಹೆಚ್.ಸಿ.ಮಹದೇವಪ್ಪನವರು, ವೆಂಕಟೇಶ್ ರವರು ಹಾಗೂ ಶಾಸಕರಾದ ಯತೀಂದ್ರ ಸಿದ್ದರಾಮಯ್ಯನವರ ಜೊತೆ ಸ್ಥಳ ಪರಿಶೀಲನೆ ನೆಡೆಸಿ ಕಾರ್ಯಕ್ರಮದ್ದಲಿ ಭಾಗವಹಿಸಿದ್ದರು.

ಸಮಾವೇಶಕ್ಕೆ ಆಗಮಿಸಲಿರುವ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಇತರೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೇಯಸ್.ಎಂ.ಪಟೇಲ್ ರವರು, ಶಾಸಕರಾದ ಶಿವಲಿಂಗೇಗೌಡರವರು, ಮಳವಳ್ಳಿ ಶಿವಣ್ಣನವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷಣ್ ರವರು ಸೇರಿದಂತೆ ಮಾಜಿ ಶಾಸಕರುಗಳು, ಮುಖಂಡರುಗಳು ಹಾಜರಿದ್ದರು.

Prev Post ಇನ್ವೆಸ್ಟ್‌ ಕರ್ನಾಟಕ ರೋಡ್‌ಷೋದ ಅಂಗವಾಗಿ ಲಂಡನ್‌ನಲ್ಲಿ ಅಲ್ಲಿನ ಸಚಿವರ ಜತೆ ಸರಣಿ ಸಭೆ
Next Post ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ