ಕರ್ನಾಟಕ ನಾಟಕ ಅಕಾಡೆಮಿಯ 2026-27 ಪ್ರಶಸ್ತಿ ಘೋಷಣೆ: ಡಾ. ಮುಖ್ಯಮಂತ್ರಿ ಚಂದ್ರು ಜೀವಮಾನ ಸಾಧನೆ ಪುರಸ್ಕೃತ, 25 ಕಲಾವಿದರು ಹಾಗೂ 7 ದತ್ತಿನಿಧಿ ಪುರಸ್ಕೃತರಿಗೆ ಗೌರವ
ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ಬೆಂಗಳೂರಿನ ಡಾ. ಮುಖ್ಯಮಂತ್ರಿ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಪ್ರಶಸ್ತಿಗಳಲ್ಲಿ ಧಾರವಾಡದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ, ಬಾಗಲಕೋಟೆಯ ಇಳಕಲ್ನ ರಮೇಶ ತಿಪ್ಪಣ್ಣ ಚಿತ್ರಗಾರ, ಹಾಸನ ಮೂಲದ ಶಿವಾನಂದ ತಗಡೂರು (ವಾಸ್ತವ್ಯ – ಬೆಂಗಳೂರು), ದೇವನಹಳ್ಳಿ ಬೆಂಗಳೂರು ಗ್ರಾಮಾಂತರದ ಆರ್. ರಾಮಕೃಷ್ಣ (ಚನ್ನಯ್ಯ), ಗದಗದ ಲಕ್ಕುಂಡಿಯ ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ, ಕಲಬುರಗಿಯ ಅಯ್ಯಣ್ಣ ಸ್ವಾಮಿ ಹಿರೇಮಠ, ಶಿವಮೊಗ್ಗದ ಸಾಗರದ ಫಣಿಯಮ್ಮ ಹೆಚ್.ಎಸ್., ಕೊಪ್ಪಳದ ಮಲ್ಲಪ್ಪ ಭರಮಪ್ಪ ಕುರಿ, ಮಂಡ್ಯದ ಕೆ.ಪಿ. ಸ್ವಾಮಿ, ಉತ್ತರ ಕನ್ನಡದ ಸಿದ್ದಾಪುರದ ಸುಶೀಲಾ ಹೆಗಡೆ ಮೂರೂರು, ಬೆಂಗಳೂರಿನ ರಾಜಕುಮಾರ್ ಎಸ್., ಶಿವಮೊಗ್ಗದ ಸಾಗರದ ಡಾ. ಎಂ. ಗಣೇಶ್ ಹೆಗ್ಗೋಡು, ಯಲಹಂಕ ಬೆಂಗಳೂರು ನಗರದಿಂದ ವೈ.ಎನ್. ಉಮಾ, ಬೆಳಗಾವಿಯ ಬೈಲಹೊಂಗಲದ ಗದಿಗೆಯ್ಯಾ ವಿ. ಹಿರೇಮಠ, ವಿಜಯನಗರದ ಕೂಡ್ಲಿಗಿಯ ಟಿ. ಭಾರತಿ, ದಾವಣಗೆರೆಯ ಬಿ. ಸಾವಿತ್ರಮ್ಮ, ತುಮಕೂರಿನ ಎಂ.ಸಿ. ಶಿವರುದ್ರಪ್ಪ ಹಾಗೂ ಬೆಂಗಳೂರಿನ ವೇಣುಗೋಪಾಲ್ ಕೆ. ಅವರನ್ನು ಆಯ್ಕೆ ಮಾಡಲಾಗಿದೆ.
ದತ್ತಿನಿಧಿ ಪ್ರಶಸ್ತಿಗಳಲ್ಲಿ ಕೋಲಾರದ ಮಾಲೂರಿನ ಎನ್.ಎಂ. ಲಕ್ಷ್ಮಯ್ಯ, ಬೆಂಗಳೂರಿನ ಬಿ.ಜಿ. ಶ್ರೀಧರ (ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ), ವಿಜಯಪುರದ ಅಶ್ವಾಕ ಹುಸೇನ ಹಾ. ಜಾಗೀರದಾರ (ಬಿ.ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರ), ಮೈಸೂರಿನ ಟಿ. ನರಸೀಪುರದ ಡಾ. ಎಂ. ಚಂದ್ರಪ್ಪ (ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ), ಮೈಸೂರಿನ ಮಾಲತಿಶ್ರೀ (ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ), ಗದಗದ ದಯಾನಂದ ಚ. ಬೀಳಗಿ (ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ), ತುಮಕೂರಿನ ಗಂಗಾಧರ ರೆಡ್ಡಿ ವಿ.ಆರ್. (ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ), ತುಮಕೂರಿನ ವೈ.ಎನ್. ಶಿವಣ್ಣ (ಕಲ್ಟರ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ) ಹಾಗೂ ಚಿತ್ರದುರ್ಗದ ಸಾಣೇಹಳ್ಳಿಯ ಚಂದ್ರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ರಂಗಭೂಮಿಯ ದಿಗ್ಗಜರು ಭಾಗವಹಿಸಲಿದ್ದಾರೆ. ಈ ಪುರಸ್ಕಾರಗಳು ಕನ್ನಡ ರಂಗಭೂಮಿಯ ಶ್ರೀಮಂತ ಪರಂಪರೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ಕಲಾವಿದರ ಸಾಧನೆಗೆ ರಾಷ್ಟ್ರಮಟ್ಟದ ಮಾನ್ಯತೆ ನೀಡಲಿವೆ.







Comments
Leave a Comment